(ತಿಟ್ಟ: kannada.oneindia.in) |
ಈ ನಡುವೆ ದೇಶದ ಗಡಿಯೆಂಬುದರ ಆಶ್ರಯ ಪಡೆದುಕೊಂಡು ನಮ್ಮ ರಾಜ್ಯದ ಆಳ್ಮೆಬದಿಯವರು ತಮ್ಮ ಆಳುವ ಹಕ್ಕನ್ನು ಉಳಿಸಿಕೊಳ್ಳಲು ಮುಂದಾಗಿರುವುದು ವಿಚಿತ್ರವಾಗಿ ಕಾಣುತ್ತಿದೆ. ಇವರು ದಾಟಿರುವುದು ದೇಶದ ಗಡಿಯೆಂದು ಹೇಳಲಾಗುತ್ತಿದ್ದರೂ ಇವರು ಹೊರಟದ್ದು ನಮ್ಮ ರಾಜ್ಯವಾದ ಕರ್ನಾಟಕದ ಗಡಿಯೊಳಗಿನಿಂದಲೇ, ಮತ್ತು ಅದನ್ನು ದಾಟಿಯೇ ಅವರು ಹೊರದೇಶಕ್ಕೆ ಹೋಗಲಾಗುವುದು.
ಸರ್ಕಾರದ ಒಳಗಡೆ ಕುಳಿತಿರುವವರೇ ಇಂದು ವಿದಾನಸಬೆಯ ಮುಕಂಡರು ಎಲ್ಲಿಗೆ ಹೋಗಿರುವರು ಎಂದು ಪ್ರಶ್ನಿಸುವಂತ ಸನ್ನಿವೇಶಕ್ಕೆ ನಮ್ಮ ರಾಜ್ಯದ ಗಡಿಯ ಮೇಲೆ ನಮ್ಮ ರಾಜ್ಯ ಸರ್ಕಾರದ್ದೇ ಹಿಡಿತ ಇಲ್ಲದಿರುವುದೇ ಕಾರಣವಾಗಲ್ವೇ? ಒಂದು ವಿಮಾನ ನಿಲ್ದಾಣ ತಲುಪಿದ ತಕ್ಶಣ ರಾಜ್ಯದ ಸೀಮೆಯನ್ನು ದಾಟಿರುವುದಾಗಿಯೂ, ಅಲ್ಲಿನ ನೆಲಪ್ರದೇಶ ನಮ್ಮ ರಾಜ್ಯದೊಳಗೇ ಇದ್ದರೂ ಅದು ಕೇಂದ್ರದ ಹಿಡಿತದಲ್ಲಿದೆ ಎಂಬ ಏರ್ಪಾಡಿನಿಂದಾಗಿ ರಾಜ್ಯ ಸರ್ಕಾರಕ್ಕೆ ತಮ್ಮ ಮುಕಂಡರು ಎಲ್ಲಿಗೆ ಹೋಗಿದ್ದಾರೆ ಎಂಬ ಸುಳಿವೇ ಸಿಗಲಾಗದಂತ ಸನ್ನಿವೇಶ ಹುಟ್ಟಿರುವುದು ಆಳ್ಮೆಯೇರ್ಪಾಡಿನ ಕುಸಿತವಲ್ಲವೇ, ಮಂದಿಯಾಳ್ವಿಕೆಯ ಅವಮಾನವಲ್ಲವೇ?
ಕರ್ನಾಟಕ ಸರ್ಕಾರದ ಒಂದು ಮುಕ್ಯ ಹುದ್ದೆಯನ್ನು ನಿಬಾಯಿಸಬೇಕಾದವರು ಅದರಿಂದ ಪಲಾಯನ ಮಾಡುವಾಗ ನಮ್ಮ ಗಡಿಯನ್ನು ರಕ್ಶಿಸಬೇಕಾದವರು ನಮ್ಮವರೇ ಆದರೆ ನಮ್ಮ ಮಂದಿಯ ಒಳಿತನ್ನು ಮನದಲ್ಲಿಟ್ಟುಕೊಂಡು ರಾಜ್ಯದ ಹಿತಾಸಕ್ತಿಯ ವಿರುದ್ದವಾದ ಪಲಾಯನವನ್ನು ತಡಿದಾದರು ಇರುತ್ತಿದ್ದರು. ಆದರೆ ಇಂದಿನ ಸನ್ನಿವೇಶದಲ್ಲಿ ರಾಜ್ಯದ ಗಡಿಯೆಂಬುದನ್ನೇ ಮಂಪರು ಮಾಡಿಟ್ಟು ಎಲ್ಲವೂ ದೇಶದ ಗಡಿಯೆಂದೇ ರೂಪಿಸಿಟ್ಟಿರುವಾಗ ಯಾವ ರಾಜ್ಯ ಸರ್ಕಾರ ತಾನೆ ತನ್ನೊಳಗಿನ ಆಳ್ಮೆಯನ್ನು ತನ್ನ ಹದ್ಬಸ್ತಿನಲ್ಲಿ ಇಟ್ಟುಕೊಳ್ಳಲಾದೀತು? ಯಾವ ರಾಜ್ಯ ಸರ್ಕಾರದಿಂದ ತಾನೆ ತನ್ನ ಮಂದಿಯ ಒಳಿತನ್ನು ಕಾಪಾಡಲು ಮುಂದಾಗಲಾಗುವುದು? ದೇಶದ ಸಂವಿದಾನದಲ್ಲಿ ರಾಜ್ಯದ ಗಡಿಬಾಗವನ್ನು ದೇಶದ ಗಡಿಬಾಗವೆಂದು ಹೇಳುವುದರೊಂದಿಗೇ ಅದರ ಮೇಲಿನ ಹಕ್ಕನ್ನೂ ಕೇಂದ್ರಕ್ಕೆ ಚ್ಯುತಿಯಾಗುವುದು ತಪ್ಪಲ್ಲವೇ?
ಈ ತೊಂದರೆಗೂ ಒಂದು ಮದ್ದು ಇದೆಯೇ? ಆಳ್ಮೆಯೇರ್ಪಾಡಿನಲ್ಲಿ ಸರಳತೆ ತರುವುದು ಇದನ್ನು ಸರಿಪಡಿಸುವುದೇ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಆಡಳಿತದ ವಿಶಯಗಳ ಹಂಚಿಕೆಯಲ್ಲಿ ಸರಳತೆ ಮೂಡಿಬರಬೇಕಲ್ಲವೇ?
0 comments
ನಿಮ್ಮ ಅನಿಸಿಕೆ ತಿಳಿಸಿರಿ: