ಯಾರ ಗಡಿ ಮತ್ತು ಯಾರ ಪಲಾಯನ?

(ತಿಟ್ಟ: kannada.oneindia.in)
ಕರ್ನಾಟಕ ರಾಜ್ಯದ ವಿದಾನ ಸಬೆಯ ಮುಕಂಡರನ್ನು ದೇಶದ ಗಡಿಯನ್ನೇ ಪಾರು ಮಾಡಿಸಿ ಸರ್ಕಾರವನ್ನು ಸುಲಬವಾಗಿ ಉಳಿಸಿಕೊಳ್ಳುವ ಪ್ರಯತ್ನ ಆಳ್ಮೆಬದಿಯ ಜನ ಮಾಡಿರಬಹುದು ಎಂಬ ಸುದ್ದಿ ಗಾಳಿಯಲ್ಲಿ ಹಾರಾಡುತ್ತಿದೆ. ಒಟ್ಟಿನಲ್ಲಿ ಮುಕಂಡರ ಕಚೇರಿಯಲ್ಲಿ ಶಾಸಕರ ರಾಜಿನಾಮೆ ಪಡೆದುಕೊಳ್ಳಲು ಯಾರೂ ಮುಂದಾಗಿರದೇ ಹೋಗಿರುವುದು ರಾಜ್ಯ ಸರ್ಕಾರದ ನಡಾವಳಿಗೆ ಅಡಚಣೆಯಾಗಿರುವುದು ಕಚಿತ.

ಈ ನಡುವೆ ದೇಶದ ಗಡಿಯೆಂಬುದರ ಆಶ್ರಯ ಪಡೆದುಕೊಂಡು ನಮ್ಮ ರಾಜ್ಯದ ಆಳ್ಮೆಬದಿಯವರು ತಮ್ಮ ಆಳುವ ಹಕ್ಕನ್ನು ಉಳಿಸಿಕೊಳ್ಳಲು ಮುಂದಾಗಿರುವುದು ವಿಚಿತ್ರವಾಗಿ ಕಾಣುತ್ತಿದೆ. ಇವರು ದಾಟಿರುವುದು ದೇಶದ ಗಡಿಯೆಂದು ಹೇಳಲಾಗುತ್ತಿದ್ದರೂ ಇವರು ಹೊರಟದ್ದು ನಮ್ಮ ರಾಜ್ಯವಾದ ಕರ್ನಾಟಕದ ಗಡಿಯೊಳಗಿನಿಂದಲೇ, ಮತ್ತು ಅದನ್ನು ದಾಟಿಯೇ ಅವರು ಹೊರದೇಶಕ್ಕೆ ಹೋಗಲಾಗುವುದು.

ಸರ್ಕಾರದ ಒಳಗಡೆ ಕುಳಿತಿರುವವರೇ ಇಂದು ವಿದಾನಸಬೆಯ ಮುಕಂಡರು ಎಲ್ಲಿಗೆ ಹೋಗಿರುವರು ಎಂದು ಪ್ರಶ್ನಿಸುವಂತ ಸನ್ನಿವೇಶಕ್ಕೆ ನಮ್ಮ ರಾಜ್ಯದ ಗಡಿಯ ಮೇಲೆ ನಮ್ಮ ರಾಜ್ಯ ಸರ್ಕಾರದ್ದೇ ಹಿಡಿತ ಇಲ್ಲದಿರುವುದೇ ಕಾರಣವಾಗಲ್ವೇ? ಒಂದು ವಿಮಾನ ನಿಲ್ದಾಣ ತಲುಪಿದ ತಕ್ಶಣ ರಾಜ್ಯದ ಸೀಮೆಯನ್ನು ದಾಟಿರುವುದಾಗಿಯೂ, ಅಲ್ಲಿನ ನೆಲಪ್ರದೇಶ ನಮ್ಮ ರಾಜ್ಯದೊಳಗೇ ಇದ್ದರೂ ಅದು ಕೇಂದ್ರದ ಹಿಡಿತದಲ್ಲಿದೆ ಎಂಬ ಏರ್ಪಾಡಿನಿಂದಾಗಿ ರಾಜ್ಯ ಸರ್ಕಾರಕ್ಕೆ ತಮ್ಮ ಮುಕಂಡರು ಎಲ್ಲಿಗೆ ಹೋಗಿದ್ದಾರೆ ಎಂಬ ಸುಳಿವೇ ಸಿಗಲಾಗದಂತ ಸನ್ನಿವೇಶ ಹುಟ್ಟಿರುವುದು ಆಳ್ಮೆಯೇರ್ಪಾಡಿನ ಕುಸಿತವಲ್ಲವೇ, ಮಂದಿಯಾಳ್ವಿಕೆಯ ಅವಮಾನವಲ್ಲವೇ?

ಕರ್ನಾಟಕ ಸರ್ಕಾರದ ಒಂದು ಮುಕ್ಯ ಹುದ್ದೆಯನ್ನು ನಿಬಾಯಿಸಬೇಕಾದವರು ಅದರಿಂದ ಪಲಾಯನ ಮಾಡುವಾಗ ನಮ್ಮ ಗಡಿಯನ್ನು ರಕ್ಶಿಸಬೇಕಾದವರು ನಮ್ಮವರೇ ಆದರೆ ನಮ್ಮ ಮಂದಿಯ ಒಳಿತನ್ನು ಮನದಲ್ಲಿಟ್ಟುಕೊಂಡು ರಾಜ್ಯದ ಹಿತಾಸಕ್ತಿಯ ವಿರುದ್ದವಾದ ಪಲಾಯನವನ್ನು ತಡಿದಾದರು ಇರುತ್ತಿದ್ದರು. ಆದರೆ ಇಂದಿನ ಸನ್ನಿವೇಶದಲ್ಲಿ ರಾಜ್ಯದ ಗಡಿಯೆಂಬುದನ್ನೇ ಮಂಪರು ಮಾಡಿಟ್ಟು ಎಲ್ಲವೂ ದೇಶದ ಗಡಿಯೆಂದೇ ರೂಪಿಸಿಟ್ಟಿರುವಾಗ ಯಾವ ರಾಜ್ಯ ಸರ್ಕಾರ ತಾನೆ ತನ್ನೊಳಗಿನ ಆಳ್ಮೆಯನ್ನು ತನ್ನ ಹದ್ಬಸ್ತಿನಲ್ಲಿ ಇಟ್ಟುಕೊಳ್ಳಲಾದೀತು? ಯಾವ ರಾಜ್ಯ ಸರ್ಕಾರದಿಂದ ತಾನೆ ತನ್ನ ಮಂದಿಯ ಒಳಿತನ್ನು ಕಾಪಾಡಲು ಮುಂದಾಗಲಾಗುವುದು? ದೇಶದ ಸಂವಿದಾನದಲ್ಲಿ ರಾಜ್ಯದ ಗಡಿಬಾಗವನ್ನು ದೇಶದ ಗಡಿಬಾಗವೆಂದು ಹೇಳುವುದರೊಂದಿಗೇ ಅದರ ಮೇಲಿನ ಹಕ್ಕನ್ನೂ ಕೇಂದ್ರಕ್ಕೆ ಚ್ಯುತಿಯಾಗುವುದು ತಪ್ಪಲ್ಲವೇ?

ಈ ತೊಂದರೆಗೂ ಒಂದು ಮದ್ದು ಇದೆಯೇ? ಆಳ್ಮೆಯೇರ್ಪಾಡಿನಲ್ಲಿ ಸರಳತೆ ತರುವುದು ಇದನ್ನು ಸರಿಪಡಿಸುವುದೇ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಆಡಳಿತದ ವಿಶಯಗಳ ಹಂಚಿಕೆಯಲ್ಲಿ ಸರಳತೆ ಮೂಡಿಬರಬೇಕಲ್ಲವೇ?

ಪ್ರತಿಯೊಂದು ರಾಜ್ಯದ ಗಡಿಯ ಮೇಲಿನ ಪೂರ್ತಿ ಹಕ್ಕು ಆಯಾ ರಾಜ್ಯ ಸರ್ಕಾರಕ್ಕೇಕೆ ಒಪ್ಪಿಸಬಾರದು? ಮುಂಬಯಿಯಲ್ಲಿನ ಕಡಲತೀರವನ್ನು ದೇಶದ ಗಡಿಯೆಂದು ಪರಿಗಣಿಸಿದ್ದಕ್ಕೆ ಮತ್ತು ಅದಕ್ಕೂ ರಾಜ್ಯ ಸರ್ಕಾರಕ್ಕೂ ಏನೂ ನಂಟಿಲ್ಲವೆಂಬ ಏರ್ಪಾಡಿನಿಂದಲೇ ತಾನೆ ೨೦೧೧ರ ನವೆಂಬರಿನಲ್ಲಿ ಮುಂಬಯಿ ಪಟ್ಟಣ ಬೀಕರ ಹೊರದಾಳಿಗೆ ತುತ್ತಾಗಿದ್ದು? ಕೇಂದ್ರದ ಬಲಗಳು ದೂರದ ಊರುಗಳಿಂದ ಬಂದು ಪಟ್ಟಣವನ್ನು ಹೊರದಾಳಿಗರಿಂದ ಕಾಪಾಡುವಶ್ಟರಲ್ಲಿ ಎಶ್ಟು ಮಂದಿ ಅಸುನೀಗಿದ್ದರು?

0 comments

ನಿಮ್ಮ ಅನಿಸಿಕೆ ತಿಳಿಸಿರಿ: